ಮರಣ - ಒಂದು ಅಂತರಂಗದ ಸನ್ನಿವೇಶ (Death - An Inside Story, Kannada Edition)

Rating:
100%
Special Price ₹ 175 Regular Price ₹ 250
ಸದ್ಗುರುಗಳು ಸಾವನ್ನು ಅತ್ಯಂತ ಸ್ಪಷ್ಟತೆಯೊಂದಿಗೆ ವಿವರಿಸುತ್ತಾರೆ ಮತ್ತು ನಮ್ಮ ಸ್ವಂತ ಮರಣದ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳುವಂತೆ ನಮ್ಮನ್ನು ಒತ್ತಾಯಿಸುತ್ತಾರೆ.
- +

Delivery Pincode

Shipping Note:
  • Free Shipping on all orders of Rs 950 and above.
  • All orders shall be dispatched within 24-48 hours except on bank holidays
  • Delivery within India is usually completed within 5 - 10 working days depending on the location.

 

ಪ್ರಪಂಚದ ಹೆಚ್ಚಿನ ಸಮಾಜಗಳಲ್ಲಿ ಸಾವು ಒಂದು ನಿಷಿದ್ಧವಾದ ವಿಚಾರವಾಗಿದೆ. ಆದರೆ ನಾವು ಇದನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಿದ್ದರೆ ಹೇಗೆ? ಮರಣವು ಒಂದು ಬಿಂಬಿಸಲಾದಂತಹ ದುರಂತವಲ್ಲದೆ, ಅದು ಜೀವನದ ಅತ್ಯಗತ್ಯ ಅಂಶವಾಗಿದ್ದರೆ? ಪರಮೋತ್ಕೃಷ್ಟತೆ ಸಾಧಿಸಲು ಆಧ್ಯಾತ್ಮಿಕ ಸಾಧ್ಯತೆಗಳಿಂದ ತುಂಬಿದ್ದರೆ? ಮೊದಲ ಬಾರಿಗೆ ಒಬ್ಬರು ಇದನ್ನೇ ಹೇಳುತ್ತಿದ್ದಾರೆ.

ಈ ವಿಶಿಷ್ಟವಾದ ಗ್ರಂಥದ ನಿರೂಪಣೆಯಲ್ಲಿ, ಸದ್ಗುರುಗಳು ತಮ್ಮ ಆಂತರಿಕ ಅನುಭವದ ಆಧಾರದ ಮೇಲೆ ಮರಣದ ಬಗ್ಗೆ ಅಪರೂಪವಾಗಿ ಮಾತನಾಡಲ್ಪಡುವ, ಹೆಚ್ಚು ಆಳವಾದ ಅಂಶಗಳನ್ನು ವ್ಯಾಪಕವಾಗಿ ವಿವರಿಸುತ್ತಾರೆ. ಪ್ರಾಯೋಗಿಕ ದೃಷ್ಟಿಕೋನದಿಂದ, ಒಬ್ಬ ವ್ಯಕ್ತಿಯು ತನ್ನ ಸಾವಿಗೆ ಹೇಗೆ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು, ಸಾಯುತ್ತಿರುವವರಿಗೆ ನಾವು ಹೇಗೆ ಅತ್ಯುತ್ತಮ ಸಹಾಯ ಮಾಡಬಹುದು ಮತ್ತು ಸಾವಿನ ನಂತರವೂ ಅವರ ಪ್ರಯಾಣವನ್ನು ನಾವು ಹೇಗೆ ಬೆಂಬಲಿಸಬಹುದು ಎಂಬುದನ್ನು ಅವರು ವಿಶದವಾಗಿ ವಿವರಿಸುತ್ತಾರೆ.

ಒಬ್ಬ ನಂಬುವವನಾಗಲಿ ಅಥವಾ ನಂಬದವನಾಗಿರಲಿ, ಭಕ್ತನಾಗಿರಲಿ ಅಥವಾ ಅಜ್ಞೇಯತಾವಾದಿಯಾಗಿರಲಿ, ಒಬ್ಬ ನಿಪುಣ ಅನ್ವೇಷಕನಾಗಿರಲಿ ಅಥವಾ ಒಬ್ಬ ಮಂದಬುದ್ಧಿಯವನಾಗಿರಲಿ, ನಿಜವಾಗಿಯೂ, ಸಾಯುವ ಎಲ್ಲರಿಗೂ ಇದೊಂದು ಪುಸ್ತಕವಾಗಿದೆ! ಸದ್ಗುರುಗಳು, ಮರಣದ ಪುಸ್ತಕದ ಬಗ್ಗೆ, ಮತ್ತು ಅದರ ಅಪರಿಷ್ಕೃತ ಮತ್ತು ನೇರವಾದ ವಿಧಾನವು ಹೇಗೆ ಬಹಳಷ್ಟು ಗೊಂದಲವನ್ನು ಉಂಟುಮಾಡುತ್ತದೆ ಎಂಬುದರ ಕುರಿತು ಬಹಿರಂಗಪಡಿಸುತ್ತಾರೆ.

More Information
Product Details

ಆಯ್ದ ಭಾಗ:

“ತಾತ್ತ್ವಿಕವಾಗಿ, ನಾನು ಇಡೀ ಜಗತ್ತಿಗೆ ತಮ್ಮ ಜೀವನದ ಪ್ರತಿ ಕ್ಷಣವನ್ನು ಸುಂದರವಾಗಿ, ಆನಂದದಿಂದ ಬದುಕುವ ಮಾರ್ಗವನ್ನು ಕಲಿಸಲು ಬಯಸುತ್ತೇನೆ. ನಂತರ, ಸ್ವಾಭಾವಿಕವಾಗಿ, ವ್ಯಕ್ತಿಯು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಇಹವನ್ನು ತ್ಯಜಿಸುತ್ತಾರೆ. ಆದರೆ ನನಗೆ ವಯಸ್ಸಾದಂತೆ, ಇದು ಸಾಕಷ್ಟು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದು ನಾನು ಅರಿತುಕೊಂಡೆ. ಹಾಗಾಗಿ ಅದು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ತಮ್ಮ ಜೀವನದ ಕೊನೆಯ ಕ್ಷಣವನ್ನು ಸಂವೇದನಾಶೀಲವಾಗಿ ನಿರ್ವಹಿಸುವಂತೆ, ಉತ್ತಮ ವಿಧಾನದಲ್ಲಿ ಮರಣ ಹೊಂದುವುದು ಹೇಗೆ ಎಂದು ಅವರಿಗೆ ಕಲಿಸಲು ನಾನು ಬಯಸುತ್ತೇನೆ. ಕೆಲವು ಕಾರಣಗಳಿಂದ ಜನರು ಆನಂದದಿಂದ ಬದುಕಲು ಸಾಧ್ಯವಾಗದಿದ್ದರೆ, ಕೊನೆಯಪಕ್ಷ ಅವರು ಚೆನ್ನಾಗಿ ಮರಣ ಹೊಂದಬೇಕು ಎಂಬುದು ನನ್ನ ಬಯಕೆ. - ಸದ್ಗುರು, ಮರಣ: ಸಾವಿನ ಮರ್ಮವನ್ನು ಭೇದಿಸಿ

 

ಪ್ರಕಾಶಕರು : ‎ಪೆಂಗ್ವಿನ್ ಆನಂದ 

 

ಭಾಷೆ: ಕನ್ನಡ

 

ಪೇಪರ್ಬ್ಯಾಕ್ : 376 ಪುಟಗಳು

 

ಐಟಂ ತೂಕ : 454 ಗ್ರಾಂ

 

ವಿಸ್ತಾರ : ‎ 23.4 x 15.6 x 1.9 ಸೆಂ

 

ಮೂಲದ ದೇಶ: ಭಾರತ

 

  • Buy any book and get Free Shipping at Rs 499/-
  • EMI available on orders above Rs 3,000 on select credit cards
  • We accept Credit or Debit Cards, Net Banking, Mobile Wallets, and UPI. All International and Indian cards are accepted.
  • View our Return and Refund Policy
Ratings & Reviews
  1. How do you rate this product?
    100%
    Wonderful book

    Review by RAGHAVENDRA PRASAD

    Posted on

sahre
© 2022 - 2024 Isha Life Pvt. Ltd. All Rights Reserved.